ಬಾಗಲಕೋಟೆ: ನಗರ ಕಾಳಿದಾಸ ವೃತ್ತದಲ್ಲಿ ದಾಂಡಿಯಾ ಕಾರ್ಯಕ್ರಮದ ನಡೆಯಿತ್ತು. ಇದರಲ್ಲಿ ಶಾಸಕ ಬಸನಗೌಡ ಪಾಟೀಲ್ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಆದರೂ ಕೂಡ ಗಣೇಶೋತ್ಸವಕ್ಕೆ ನಾವು ಪರ್ಮಿಶನ್ ಪಡೆಯಬೇಕಂತೆ ಎಂದು ಹೇಳಿದ್ದಾರೆ.
ನಗರದ ದಾಂಡಿಯಾ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮೊದಲು ಆಜಾನ್ ಕೂಗುವುದನ್ನ ನಿಲ್ಲಿಸಿರಿ ಅಂತಾ ಹೇಳಿದೆ. ಆದರೆ ವಿಜಯಪುರದಲ್ಲಿ ಯಾವುದೇ ಪರ್ಮಿಶನ್ ತೆಗೆದುಕೊಳ್ಳಬೇಕಿಲ್ಲ. ನಾವು ಪರ್ಮಿಶನ್ ತೆಗೆದುಕೊಳ್ಳುವುದಿಲ್ಲ ಅಂತಾ ನಾನು ಸಿಎಂ ಬಸವರಾಜ ಬೊಮ್ಮಾಯಿಗೆ ಹೇಳಿದ್ದೆ. ಆದರೆ ಅವರು ಏನಾದ್ರೂ ಮಾಡಿ ಶಾಂತ ರೀತಿಯಲ್ಲಿ ಮಾಡಿ ಅಂಯಾ ಹೇಳಿದ್ದರು. ಸರ್ಕಾರ ನಮ್ಮದೇ ಇದೆ ನಾವ್ಯಾಕೆ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದರು.
ಇನ್ನು ನಾನು ಹಿಂದೂಗಳ ವೋಟ್ ನಿಂದಲೇ ಚುನಾವಣೆ ಗೆದ್ದಿದ್ದೇನೆ. ನಾನು ಅವರಿಗೆ ವೋಟು ನನಗೆ ಬೇಡ ಅಂತ ಹೇಳಿದ್ದೆ ಹಿಂದುತ್ವ ಉಳಿಯಬೇಕಾದ್ರೆ ಚಿರಂತಿ ಮಠವನ್ನು ಮ್ತೆ ಗೆಲ್ಲಿಸಬೇಕು. ಶಾಸಕ ವೀರಣ್ಣ ಚಿರಂತಿ ಮಠ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಯಾರೋ ಕೆಲವವೊಬ್ಬರು ಚುನಾವಣೆಗೆ ನಿಲ್ಲಲು ಸಿದ್ದತೆಯಲಿದ್ದಾರೆ ಎಂದು ಹೇಳಿದ್ದಾರೆ.