ಕಳ್ಳರನ್ನು ಹಿಡಿಯಬೇಕಿದ್ದ ಪೇದೆಯೇ ಸುಲಿಗೆಗೆ ಇಳಿದಿದ್ದನು. ವಸೂಲಿಗಿಳಿದಿದ್ದ ಕಾನ್ಸ್ಟೇಬಲ್ ಅರೆಸ್ಟ್ ಮಾಡಲಾಗಿದೆ. ಗೋವಿಂದರಾಜನಗರ ಠಾಣೆ ಪೇದೆ ಆನಂದ್ ಅಮಾನತುಗೊಳಿಸಲಾಗಿದೆ.
ಸುಲಿಗೆ ಪ್ರಕರಣದಲ್ಲಿ ಹಲಸೂರುಗೇಟ್ ಪೊಲೀಸರ ಕೈಗೆ ಆನಂದ್ ಸಿಕ್ಕಿಬಿದ್ದಿದ್ದು.
ಆನಂದ ಮ್ಯಾಚ್ ಬೆಟ್ಟಿಂಗ್ನಲ್ಲಿ ಕೋಟಿ ಕೋಟಿ ಸೋತಿದ್ದು, ಅಕೌಂಟ್ ಝೀರೋ ಆಯ್ತು ಅಂತ ಸುಲಿಗೆಗೆ ಇಳಿದಿದ್ದನು. ಮ್ಯಾಚ್ ಬುಕ್ಕಿಗಳನ್ನೇ ಬುಟ್ಟಿಗೆ ಹಾಕ್ಕೊಂಡು ಹಣ ಸುಲಿಗೆ ಮಾಡ್ತಿದ್ದನು. ಕಾನ್ಸ್ಟೇಬಲ್ ದೋ ನಂಬರ್ ಅಡ್ಡೆ ಟಾರ್ಗೆಟ್ ಮಾಡಿ ರೇಡ್ ಮಾಡ್ತಿದ್ದನು.
ಆನಂದ ಕಾನ್ಸ್ಟೇಬಲ್ ಐಡಿ ಕಾರ್ಡ್ ತೋರಿಸಿ ಸುಲಿಗೆ ಮಾಡುತ್ತಿದ್ದನು, ಆನಂದನ ಸುಲಿಗೆ ಅವತಾರ ಡಿಸೆಂಬರ್ 7ರಂದು ಬಯಲಾಗಿತ್ತು. ಆನಂದ ಸುಣಕಲ್ ಪೇಟೆ ಬಳಿ ರಾಜು ಎಂಬಾತನ ಸುಲಿಗೆ ಮಾಡಿದ್ದನು. ಹವಾಲಾ ಹಣ ಸಾಗಿಸ್ತಿದ್ದೀಯ ಅಂತಾ ಬೆದರಿಸಿ ಅಕೌಂಟ್ಗೆ 2 ಲಕ್ಷ ಹಾಕಿಸಿಕೊಂಡಿದ್ದ, ರಾಜು ಮುಖೇಶ್ ಎಂಬಾತನ ಅಕೌಂಟ್ಗೆ ಹಣ ಹಾಕ್ತಿದ್ದಂತೆ ಎಸ್ಕೇಪ್ ಆಗಿದ್ದನು. ರಾಜು ಈ ಸಂಬಂಧ ಹಲಸೂರು ಠಾಣೆಗೆ ದೂರು ನೀಡಿದ್ದನು. ಹಲಸೂರು ಗೇಟ್ ಪೊಲೀಸರು ಕಾನ್ಸ್ಟೇಬಲ್ ಆನಂದ್ನನ್ನು ಬಂಧಿಸಿದ್ದಾರೆ. ಡಿಸಿಪಿ ಲಕ್ಷ್ಮಣ್ ನಿಂಬರಗಿ ಆನಂದ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.