spot_img
spot_img
spot_img
spot_img
spot_img
spot_img

ಗೃಹರಕ್ಷಕದಳದ ಇಲಾಖೆಯ ಬಗ್ಗೆ ನಕಲಿ ದೂರು : ಸ್ಪಷ್ಟನೆ ನೀಡಿದ ಕಮಾಂಡಟ್ ಕಿರಣ ನಾಯಿಕ

Published on

ಬೆಳಗಾವಿ : ಜಿಲ್ಲಾ ಗೃಹರಕ್ಷಕದಳದ ಇಲಾಖೆಯ ಬಗ್ಗೆ ಸುಳ್ಳು ದೂರು ಅರ್ಜಿ ನೀಡುತ್ತಿರುವ ಕುರಿತು.ಸ್ಪಷ್ಟ ಪಡಿಸಿದ ಕಮಾಂಡಂಟ ಡಾ!ಕಿರಣ ನಾಯಿಕ ಗ್ರಹರಕ್ಷಕದಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೃಹರಕ್ಷಕದಳ ಸಂಸ್ಥೆಯಲ್ಲಿ ಗೃಹರಕ್ಷಕರು ನಿಷ್ಠಾಮ ಸೇವಕರಾಗಿರುತ್ತಾರೆ. ಗೃಹರಕ್ಷಕರು ವೇತನ ಪಡೆಯುವ ಖಾಯಂ ಸಿಬ್ಬಂದಿಗಳಾಗಿರುವುದಿಲ್ಲ. ಕೇವಲ ತುರ್ತು ಸಮಯದಲ್ಲಿ ಬಂದೋಬಸ್ತ ಕರ್ತವ್ಯಗಳರುವಾಗ ಮಾತ್ರ ಗೌರವ ಧನ ಎಂದು ಪಡೆಯುತ್ತಾರೆ. ಆದ್ದರಿಂದ ಗೃಹರಕ್ಷಕದಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಯಾವುದೇ ತರಹದ ಆರ್ಥಿಕ ಲಾಭ ಇರುವುದಿಲ್ಲ. ಹಾಗೂ ಗೃಹರಕ್ಷಕರಾದ ಮಾತ್ರಕ್ಕೆ ಯಾವುದೇ ರೀತಿಯಿಂದ ಜೀವನ ಆಧಾರ ಇರುವುದಿಲ್ಲ.

WhatsApp Group Join Now
Telegram Group Join Now

ಗೃಹರಕ್ಷಕದಳ ಒಂದು ನಿಷ್ಠಾಮ ಸೇವೆಯಾಗಿದ್ದು, ಈ ಸಂಸ್ಥೆಯಲ್ಲಿ ಅವರ ವೃತ್ತಿ ಜೀವನದ ಜೊತೆಗೆ ಒಂದು ಸಮಾಜ ಸೇವೆ ಮಾಡುವ ಮನೋಭಾವ ಇಚ್ಛೆಯುಳ್ಳವರನ್ನು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಗೃಹರಕ್ಷಕರ ಸೇವಾ ಅವಧಿಯು ಮೂರು ವರ್ಷಗಳಾಗಿದ್ದು, ಪ್ರತಿ ಮೂರು ವರ್ಷಗಳಗೊಮ್ಮೆ ನವೀಕರಣ ಪ್ರಕ್ರೀಯೆಯನ್ನು ನಿಯಮಾನುಸಾರ ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ. ಆದರೆ ಸುಮಾರು 10-15 ವರ್ಷಗಳಿಂದ ನವೀಕರಣ ಪ್ರಕ್ರೀಯೆಯನ್ನು ಕೈಗೊಂಡಿರುವುದಿಲ್ಲ.

ಸದರಿ ವಿಷಯದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾನ್ಯರವರ ಆದೇಶದ ಮೇರೆಗೆ ಹಾಗೂ ನಿಯಮಾನುಸಾರ ಎಲ್ಲ ಘಟಕಾಧಿಕಾರಿಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅವರ ಶಿಫಾರಸ್ಸು ಹಾಗೂ ಕಚೇರಿಯ ಬೋಧಕರ ಪರಿಶೀಲನೆ ಮೇರೆಗೆ ನವೀಕರಣ ಪ್ರಕ್ರೀಯೆ ಮಾಡಲಾಗಿರುತ್ತದೆ.

ನವೀಕರಣ ಪ್ರಕ್ರೀಯೆಲ್ಲ ಕೆಲವು ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಬೆಳಗಾವಿ ಗೃಹರಕ್ಷಕದಳದ ಕೆಲವು ಘಟಕಾಧಿಕಾರಿಗಳು ಹಾಗೂ ಪ್ರಭಾರ ಘಟಕಾಧಿಕಾರಿಗಳು ಅವರವರ ವೈಯಕ್ತಿಕ ಸ್ವಾರ್ಥಕ್ಕೆ ಮತ್ತು ಅವರ ಕರ್ತವ್ಯದ ಲೋಪದೋಷಗಳನ್ನು ಮರೆಮಾಚಲು ದುರುದ್ದೇಶದಿಂದ ಗೃಹರಕ್ಷಕರನ್ನು ಪ್ರಚೋದಿಸಿ ಆಡಳತ ಹಿತದೃಷ್ಟಿಯಿಂದ ಹಾಗೂ ಮಾನಸಿಕವಾಗಿ ನಮಗೆ ತೊಂದರೆ ಉಂಟು ಮಾಡುತ್ತಿರುತ್ತಾರೆ.ಗೃಹರಕ್ಷಕದಳ ಒಂದು ಸಮವಸ್ತ್ರದಾರಿ ಇಲಾಖೆಯಾಗಿದ್ದು, ಇಲ್ಲ ಎಲ್ಲ ಕಾರ್ಯ ಕರ್ತವ್ಯಗಳು ಸರ್ಕಾರದ ನಿಯಮಾನುಸಾರ ಹಾಗೂ ಕಾನೂನು ಬದ್ಧವಾಗಿ ನಡೆಯುತ್ತವೆ. ಈಗಾಗಲೇ ಇಲಾಖೆಯಿಂದ ಸಮಾಲೋಪನೆಗೊಂಡ ಗೃಹರಕ್ಷಕರು ವಿವಿಧ ದಿನಪತ್ರಿಕೆ, ಸಂಘ ಸಂಸ್ಥೆಗಳು, ರಾಜಕೀಯ ವ್ಯಕ್ತಿಗಳ ಹಾಗೂ ಸರ್ಕಾರಿಯ ಹಿರಿಯ ಅಧಿಕಾರಿಗಳಗೆ ಸುಳ್ಳು ದೂರು ನೀಡುತ್ತಿದ್ದಾರೆ’ ಎಂಬ ವಿಷಯ ತಿಳಿದು ಬಂದಿರುತ್ತದೆ.

WhatsApp Group Join Now
Telegram Group Join Now

ಈಗಾಗಲೆ ಹಿಂದಿನ ಘಟಕಾಧಿಕಾರಿಗಳಾದ ಶ್ರೀ ಬಸವರಾಜ ಸಿ. ಹಂಡಗಿ ಸ್ಟಾಪ್ ಆಫೀಸರ್, ಶ್ರೀ. ಸಂಜಯ ಡಿ ನಿಂಬಾಳಕರ, ನಿಪ್ಪಾಣಿ ಘಟಕ, ಶ್ರೀ. ಮಹಾಂತೇಶ ಎಸ್., ಕಿತ್ತೂರ, ಗುರ್ಲಹೊಸೂರ ಘಟಕ, ಶ್ರೀ. ಸುರೇಶ ಡಿ, ಲಾಡರ, ಸವದತ್ತಿ ಘಟಕ, ಚಿಕ್ಕೋಡಿ ಘಟಕದ ಘಟಕಾಧಿಕಾರಿ ಶ್ರೀ ಅಮರಜೀತ ಐ, ಪಟ್ಟ, ಶ್ರೀ. ಸುರೇಶ ಡಿ. ಫಸ್ತಿ, ಗೃಹರಕ್ಷಕ ಯಮಕನಮರ್ಡಿ ಘಟಕ ಹಾಗೂ ಇಲಾಖೆಯ ನಿವೃತ್ತಿಗೊಂಡ ಮತ್ತು ಹಾಲಿಯಲ್ಲಿರುವ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ, ಸಮಾಲೋಪನೆಗೊಂಡ ಗೃಹರಕ್ಷಕರು ಕೂಡಿಕೊಂಡು ಗುಂಪುಗಾರಿಕೆ ಮಾಡಿ ಇಲಾಖೆಗೆ ಕಪ್ಪು ಚುಕ್ಕೆ ಬರುವಂತೆ ಮಾಡುತ್ತಿರುತ್ತಾರೆ ಎಂಬ ಮಾಹಿತಿ ಬಂದಿರುವುದರಿಂದ ಇವರ ಮೇಲೆ ತನಿಖೆ ಪ್ರಕ್ರಿಯೆಯಲ್ಲಿರುತ್ತದೆ ಎಂಬ ವಿಷಯವನ್ನು ತಿಳಸಬಯಸುತ್ತೇನೆ!

ಚುನಾವಣೆ ಸಂದರ್ಭದಲ್ಲಿ, ತುರ್ತು ಸಮಯದಲ್ಲ. (VVIP) ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲ. ಮೇಲೆ ಸೂಚಿಸಿರುವ ಜನರು ರಾಷ್ಟ್ರಪತಿಗಳಿಗೆ, ಪ್ರದಾವಿನಂತಿಸಲಾಗಿದೆ, ಮುಖ್ಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ, ಚುನಾವಣಾ ಆಯೋಗಕ್ಕೆ ಹೀಗೆ ಹಲವಾರು ಗಣ್ಯ ವ್ಯಕ್ತಿಗಳಿಗೆ ಹಾಗೂ ಸರ್ಕಾರಿಯ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ದೂರು ನೀಡಿ ಇಲಾಖೆಯ ಹಾಗೂ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಬಗ್ಗೆ ತಪ್ಪು ಭಾವನೆ ಸೃಷ್ಟಿಸಿ ಕಳಂಕ ಬರುವ ಕೆಲಸ ಮಾಡಿ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಈ ಹಿಂದೆಯೂ ಕಮಾಂಡಂಟ್‌ ಹಾಗೂ ಪ್ರಭಾರ ಕಮಾಂಡಂಟ್‌ರಾಗಿ ಕಾರ್ಯ ನಿರ್ವಹಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಗೂ ಇದೇ ರೀತಿ ಕಾಡಿರುತ್ತಾರೆ.

ಆದ್ದರಿಂದ ಸದರಿ ವಿಷಯದ ಬಗ್ಗೆ ಯಾವುದೇ ತರಹ, ಯಾರಿಂದಲಾದರೂ ತಮ್ಮಲ್ಲ ದೂರು ಮನವಿ ಬಂದಲ್ಲಿ ಕೂಲಂಕುಶವಾಗಿ ಪರಿಶೀಲಿಸಿ ಇಲಾಖೆಯ ಹಾಗೂ ಇಲಾಖೆಯ ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಹಿತದೃಷ್ಟಿಯನ್ನು ಪರಿಗಣಿಸಿ ಸುಳ್ಳು ದೂರುಗಳನ್ನು ನೀಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನ್ಯರವರಲ್ಲಿ ವಿನಂತಿಸಲಾಗಿ

ಡಾ. ಕಿರಣ ರುದ್ರಾ ನಾಯ್ಕ, ಪಿ.ಹೆಚ್.ಡಿ ಜಿಲ್ಲಾ ಕಮಾಂಡಂಟ
ಗೃಹರಕ್ಷಕದಳ, ಬೆಳಗಾವಿ ಜಿಲ್ಲೆ.

WhatsApp Group Join Now
Telegram Group Join Now

ವರದಿ- ಬ್ರಹ್ಮಾನಂದ ಪತ್ತಾರ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

ವಿವೇಕವಾರ್ತೆ: ಮದುವೆಗೆ ಪೋಷಕರು ವಿರೋಧಿಸಿದ್ದಕ್ಕೆ ಹೊಳೆನರಸೀಪುರದಲ್ಲಿ (Holenarasipur) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಯುವಕ...

ಬೆಟ್ಟದ ನೆಲ್ಲಿಕಾಯಿ ನೋಡಲು ಸಣ್ಣಗಿದ್ರೂ ಇದರ ಉಪಯೋಗ ಕೇಳಿದ್ರೆ ಆಶ್ಚರ್ಯಪಡುತ್ತೀರಾ!

ಹಿಂದೆ ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಲ್ಲಿಕಾಯಿ ಮರಗಳು ಇದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ...

ದಿನ ಭವಿಷ್ಯ : ಈ ರಾಶಿಯವರಿಗೆ ಧನ ಲಾಭ ಆದರೆ ಎಚ್ಚರ

ಮೇಷ(19 ಮಾರ್ಚ್, 2024) ಉತ್ತಮ ಆರೋಗ್ಯ ಏನಾದರೂ ಅಸಾಮಾನ್ಯವಾಗಿದ್ದನ್ನು ಸಾಧಿಸಲು ಸಾಧ್ಯವಾಗಿಸುವ ಒಂದು ವಿಶೇಷ ದಿನ. ಇಂದು ನೀವು ಹಣಕ್ಕೆ...

ಮೊದಲನೇ ಬೆಳೆಗೆ ಒಂದು ಕೋಟಿ ಲಾಭ.! ಅಷ್ಟಕ್ಕೂ ರೈತ ಬೆಳೆದಿದ್ದಾದರೂ ಏನು ಗೊತ್ತಾ?

ವಿವೇಕವಾರ್ತೆ :ಕೃಷಿ ಇಂದು ಯಾವುದೇ ಬಿಸಿನೆಸ್ ಗಿಂತ ಕಡಿಮೆ ಇಲ್ಲ. ರೈತನು ಕೂಡ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಪ್ರಸ್ತುತವಾಗಿ...
error: Content is protected !!